ರಾಗಂ ಅವರ ದಂಡಿ: ಮಾತು, ವಿಮರ್ಶೆ – ಪರಾಮರ್ಶೆ

ರಾಗಂ ಅವರ ದಂಡಿ: ಮಾತು, ವಿಮರ್ಶೆ – ಪರಾಮರ್ಶೆ

ರಾಗಂ ಕುರಿತು ಸಾಹಿತ್ಯ
Apr 2025
ದಂಡಿ' ಅಂತಹ ಒಂದು ಅಪರೂಪದ ಪ್ರಯೋಗಶೀಲ ಕಥಾನಕ, ಶ್ರೀ ಶಾಂತಾರಾಮ ನಾಯಕರು ಗುರುತಿಸಿದಂತೆ 'ದಂಡಿ ಸಾಮಾನ್ಯರ ಅಸಾಮಾನ್ಯ ಹೋರಾಟ'ದ ಚಾರಿತ್ರಿಕ ದಾಖಲೆ. ಕರಾವಳಿ ತೀರದ ಜನರ ಬದುಕು-ಬವಣೆಗಳ ಜೊತೆಯಲ್ಲಿ ಸೃಷ್ಠಿಯಾಗುವ ಪಾತ್ರ ಪ್ರಪಂಚ, ಸ್ವಾತಂತ್ರ್ಯ ಹೋರಾಟದ ಹಲವು ಸಾಧ್ಯತೆಗಳಿಗೆ ಒಡ್ಡಿಕೊಂಡ ಕುತೂಹಲದ ಕಥೆಯಾಗಿ ಅರಳಿಕೊಳ್ಳುತ್ತ ಸಾಗುತ್ತದೆ. ಕರಾವಳಿ ತೀರದ ಸಮೃದ್ಧ ಸಾಮಾಜಿ-ಸಾಂಸ್ಕೃತಿಕ ಐತಿಹ್ಯಗಳು, ಶೃದ್ಧೆ-ನಂಬಿಕೆಗಳು ಗಾಂಧಿ ಆಲೋಚನೆಗಳನ್ನು ಪಡಿ ಮಾಡಿಸಿಕೊಂಡು ಜನಾಂದೋಲನದ ಸ್ವರೂಪ ಪಡೆಯುವ ಐತಿಹಾಸಿಕ ವಿದ್ಯಮಾನವೊಂದನ್ನು 'ದಂಡಿ' ಕಥೆಯಾಗಿ ಹೆಣೆದ ರಾಗಂರ ಕಥನ ಕೌಶಲ್ಯ ಬೆರಗು ಹುಟ್ಟಿಸುತ್ತದೆ. ಇಲ್ಲಿನ ಇಪ್ಪತ್ತೈದು ಲೇಖಕರ ವಿದ್ವತ್‌ಪೂರ್ಣವಾದ ಲೇಖನಗಳನ್ನು ಸಂಕಲಿಸಿ ಸಹೃದಯಿ ಓದುಗರ ಕೈಗಟ್ಟಿದ್ದಾರೆ.

More from ರಾಗಂ ಕುರಿತು ಸಾಹಿತ್ಯ